‘ಕೇಂದ್ರ ನಿಗದಿ ಮಾಡಿರುವ ಪ್ಯಾಕೇಜ್ ತೀರಾ ಕಡಿಮೆ ಮೊತ್ತದ್ದಾಗಿದೆ. ಆ ಪ್ಯಾಕೇಜ್ನ ಮೊತ್ತವನ್ನು ಇನ್ನೂ ಶೇ 30–40ರಷ್ಟು ಹೆಚ್ಚಿಸಿದರೂ, ರೋಗಿಗೆ ನೀಡಿದ ಚಿಕಿತ್ಸೆಯ ವೆಚ್ಚವೂ ದಕ್ಕುವುದಿಲ್ಲ. ಇನ್ನು ಲಾಭದ ಮಾತೆಲ್ಲಿ’ ಎಂದು ಆರೋಗ್ಯಸೇವೆ ಒದಗಿಸುವವರ ಸಂಘದ ಅಧ್ಯಕ್ಷ ಅಲೆಕ್ಸಾಂಡರ್ ಥಾಮಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ನೀತಿ ಆಯೋಗಕ್ಕೂ ಪತ್ರ ಬರೆದಿದ್ದಾರೆ.