ನವದೆಹಲಿ: ಗಂಗಾನದಿ ಸ್ವಚ್ಛತೆ ರಾಷ್ಟ್ರೀಯ ಅಭಿಯಾನದ (ಎನ್ಎಂಸಿಜಿ) ಕಾರ್ಯಕಾರಿ ಸಮಿತಿಯು ₹1,573.28 ಕೋಟಿ ಮೊತ್ತದ 10 ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಆಗ್ರಾಕ್ಕೆ ಮೀಸಲಿಡಲಾಗಿದೆ.
ಗಂಗಾನದಿ ಸೇರುವ ಮಲಿನ ನೀರನ್ನು ತಡೆಯಲು ಹಿಮಾಚಲ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲೂ ಕಾಮಗಾರಿ ನಡೆಸಲು ಅನುದಾನ ನೀಡಲಾಗಿದೆ.
ಆಗ್ರಾದ ಯಮುನಾ ನದಿ ಮಾಲಿನ್ಯ ಸಮಸ್ಯೆಗೆ ಸಮಗ್ರ ಪರಿಹಾರ ಕೈಗೊಳ್ಳಲುಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
***
ಅಂಕಿ–ಅಂಶಗಳು
₹857 ಕೋಟಿ
ಆಗ್ರಾದ ಒಳಚರಂಡಿ, ತ್ಯಾಜ್ಯ ಸಂಸ್ಕರಣ ಘಟಕ ಯೋಜನೆಗಳಿಗೆ ಅನುದಾನ
₹64 ಕೋಟಿ
ಉತ್ತರ ಪ್ರದೇಶದ ಸುಲ್ತಾನ್ಪುರ ಎಸ್ಟಿಪಿ ನಿರ್ಮಾಣಕ್ಕೆ ಅನುದಾನ
₹328
ಬಿಹಾರದ ಛಪ್ರಾ, ಫತುಹಾ, ಖತಿಯಾರ್ಪುರ ಮತ್ತು ಖಗಾರಿಯಾದಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿಗೆ ನೀಡಿದ ಹಣ