ಕೆಲವು ದಿನಗಳ ಹಿಂದೆ ಲಾಕ್ಡೌನ್ ನಿಯಮಾನುಸಾರ ವಾಹನದ ಪಾಸ್ ತೋರಿಸುವಂತೆ ಕಿರಿಯ ಪೊಲೀಸ್ ಅಧಿಕಾರಿ ಗಣೇಶ್ ಲಾಲ್ ಅವರು ಮನೋಜ್ ಕುಮಾರ್ಗೆ ಕೇಳಿದ್ದರು. ಇದರಿಂದ ಮನೋಜ್ ಕೋಪಗೊಂಡಿದ್ದರು. ಈ ಘಟನೆ ಎಸ್ಐ ಗೋವಿಂದ್ಸಿಂಗ್ ಗಮನಕ್ಕೆ ಬಂದಾಗ ಅವರು, ಹಿರಿಯ ಅಧಿಕಾರಿಯನ್ನು ಪ್ರಶ್ನಿಸುವ ‘ಧೈರ್ಯ’ ತೋರಿದ್ದಕ್ಕೆ ಎಲ್ಲರೆದರು ಐವತ್ತು ಬಸ್ಕಿ ಹೊಡೆಯುವಂತೆ ಗಣೇಶ್ ಲಾಲ್ಗೆ ಆದೇಶ ನೀಡಿದ್ದರು.