ನವದೆಹಲಿ: 2019–20ನೇ ಹಣಕಾಸು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ದೇಶದಲ್ಲಿ ಬ್ಯಾಂಕ್ ವಂಚನೆಯ 5,743 ಪ್ರಕರಣಗಳು ನಡೆದಿದ್ದು ₹ 95,760 ಕೋಟಿ ದುರುಪಯೋಗವಾಗಿದೆ ಎಂದು ಹಣಕಾಸು ಸಚಿವ ಎನಿರ್ಮಲಾ ಸೀತಾರಾಮನ್ ತಿಳಿಸಿದರು.
ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಮಂಗಳವಾರ ಅವರು ಈ ಮಾಹಿತಿ ನೀಡಿದರು.
ಈ ಮೊತ್ತವು ಕಳೆದ ಐವು ವರ್ಷಗಳಲ್ಲಿ ನಡೆದ ಒಟ್ಟು ಹಗರಣಗಳಲ್ಲಿ ದುರ್ಬಳಕೆಯಾದ ಹಣದ ಪ್ರಮಾಣಕ್ಕಿಂತ ಹೆಚ್ಚಿನದ್ದಾಗಿದೆ.