ಪಟ್ನಾ: ‘ನಿಮ್ಮಂತೆಯೇ ನನ್ನ ಹೃದಯದಲ್ಲೂ ಬೆಂಕಿಯ ಜ್ವಾಲೆಗಳು ಧಗಧಗಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪುಲ್ವಾಮಾದಲ್ಲಿನ ಉಗ್ರರ ದಾಳಿಯ ಬಗ್ಗೆ ಅವರು ಭಾವನಾತ್ಮಕವಾಗಿ ಮಾತನಾಡಿದರು.
ಬಿಹಾರದ ಬೇಗುಸರಾಯ್–ಬರೌನಿಯಲ್ಲಿ ಭಾನುವಾರ ₹33 ಸಾವಿರ ಕೋಟಿ ವೆಚ್ಚದ ಪಟ್ನಾ ಮೆಟ್ರೊ ರೈಲು ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಬಿಹಾರದ ಹುತಾತ್ಮ ಯೋಧರಾದ ಸಂಜಯ್ ಕುಮಾರ್ ಸಿನ್ಹಾ ಮತ್ತು ರತನ್ ಕುಮಾರ್ ಠಾಕೂರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಂಪೂರ್ಣ ಬಹುಮತ ಪಡೆದ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮೋದಿ ಇದೇ ವೇಳೆ ಕರೆ ನೀಡಿದರು.
ಪುಲ್ವಾಮಾ ದಾಳಿಗೆ ಭಾರತ ಶೀಘ್ರ ಪ್ರತೀಕಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಪಾಲ ಲಾಲ್ಜಿ ಟಂಡನ್, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ರಾಂ ವಿಲಾಸ್ ಪಾಸ್ವಾನ್, ರಾಮ್ ಕೃಪಾಲ್ ಯಾದವ್ ಮತ್ತು ಗಿರಿರಾಜ ಸಿಂಗ್ ವೇದಿಕೆಯಲ್ಲಿದ್ದರು.