ಶಬರಿಮಲೆಗೆ ಪ್ರವೇಶಿಸಲು ರೆಹಾನಾ ಪ್ರಯತ್ನಿಸಿದ್ದರ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು,. ಕಳೆದ ಶುಕ್ರವಾರ ರೆಹಾನಾ ಮತ್ತು ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕಾಗಿ ಬಂದಿದ್ದರು.180 ಪೊಲೀಸರ ಬಿಗಿ ಭದ್ರತೆಯಲ್ಲಿ ಇವರನ್ನು ನಡಪ್ಪಂದಲ್ ವರೆಗೆ ತಲುಪಿಸಲಾಗಿತ್ತು. ಆದರೆ 18 ಮೆಟ್ಟಲುಗಳನ್ನು ಏರುವುದಕ್ಕೆ ಅಲ್ಲಿ ತೀವ್ರ ಪ್ರತಿಭಟನೆ ಕಂಡು ಬಂದ ಕಾರಣ ಅಯ್ಯಪ್ಪ ದರ್ಶನಕ್ಕೆ ಇವರಿಗೆ ಸಾಧ್ಯವಾಗಲಿಲ್ಲ.