ಬೆಳಿಗ್ಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕರಿಂದ ಐದು ಮಂದಿ ಗುಂಪನ್ನು ಮಂಡಿ ಬೋರ್ಡ್ ಠಾಣೆ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆ ಬಳಿ ತಡೆದಿದ್ದಾರೆ. ಲಾಕ್ಡೌನ್ ಪಾಸ್ ತೋರಿಸುವಂತೆ ಗುಂಪಿಗೆ ಪೊಲೀಸರು ತಿಳಿಸಿದ್ದಾರೆ. ಆದರೆ, ತಪ್ಪಿಸಿಕೊಳ್ಳಲೆತ್ನಿಸಿದ ಗುಂಪು ಪೊಲೀಸರತ್ತ ವಾಹನ ನುಗ್ಗಿಸಲು ಯತ್ನಿಸಿದೆ. ನಂತರ ಪೊಲೀಸರ ಮೇಲೇ ದಾಳಿ ನಡೆಸಿದೆ ಎಂದು ಪಟಿಯಾಲ ಜಿಲ್ಲಾ ಎಸ್ಪಿ ಮಂದೀಪ್ ಸಿಂಗ್ ಸಿದು ತಿಳಿಸಿದ್ಧಾರೆ.