‘ನಾವು ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿರುವುದರಿಂದ ಮರಳಿ ದೆಹಲಿಗೆ ಬಂದಿದ್ದೇವೆ. ಆದ್ದರಿಂದ ಸಮಷ್ಟಿಪುರ (ಬಿಹಾರ), ಬಾಲಸೋರ್ (ಒರಿಸ್ಸಾ) ಹಾಗೂ ಸಂಗಮ್ನೇರ್ದಲ್ಲಿ (ಮಹಾರಾಷ್ಟ್ರ) ಆಯೋಜಿಸಿದ್ದ ಸಭೆಗಳು ತಡವಾಗಿ ನಡೆಯಲಿವೆ. ಅದಕ್ಕಾಗಿ ವಿಷಾದಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು ಟ್ವೀಟ್ ಜೊತೆಗೆ ವಿಮಾನದ ವಿಡಿಯೊವನ್ನೂ ಟ್ಯಾಗ್ ಮಾಡಿದ್ದರು.