ಕಳೆದೆರಡು ದಿನಗಳಿಂದ ರಾಜ್ಯದ ವಿವಿಧೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಲವೆಡೆ ಮನೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಯು ಜಖಂಗೊಂಡಿದ್ದು, ವ್ಯಾಪಕ ಬೆಳೆ ಹಾನಿಯೂ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಮನೆಗಳ ಕುಸಿತದಿಂದಾಗಿ ರಾಜ್ಯದ ಬಾರಾಬಂಕಿ, ಸೀತಾಪುರ, ಬಹರೈಚ್, ರಾಯಬರೇಲಿ, ಅಂಬೇಡ್ಕರ್ ನಗರ ಜಿಲ್ಲೆಗಳಲ್ಲಿ ಮಕ್ಕಳು ಸೇರಿದಂತೆ 12 ಜನರು ಸತ್ತಿದ್ದಾರೆ.