ಸಹಕಾರ ಬ್ಯಾಂಕುಗಳಿಂದ ರೈತರು ಪಡೆದ ಸಂಪೂರ್ಣ ಅಲ್ಪಾವಧಿ ಸಾಲ, ರಾಷ್ಟ್ರೀಕೃತ ಬ್ಯಾಂಕು ಮತ್ತು ಇತರ ಬ್ಯಾಂಕುಗಳಿಂದ ₹2 ಲಕ್ಷದವರೆಗೆ ಸಾಲ ಪಡೆದ ಸುಸ್ತಿದಾರ ರೈತರ ಸಾಲ ಮನ್ನಾ ಮಾಡುವುದಾಗಿ, ಸರ್ಕಾರ ರಚನೆ ಬಳಿಕ ಮುಖ್ಯಮಂತ್ರಿ ಗೆಹ್ಲೋಟ್ ಪ್ರಕಟಿಸಿದ್ದರು. ಆ ನಂತರ, ಇದಕ್ಕೆ ಪೂರಕವಾಗಿ ಸಮಿತಿ ರಚಿಸಲಾಗಿತ್ತು. ಜನವರಿ 11ರಂದು ಸಮಿತಿಯ ಮುಂದಿನ ಸಭೆ ನಡೆಯಲಿದೆ.