ಮಂಗಳವಾರ ಸಂಜೆ ಇಲ್ಲಿನ ನಿವಾಸಿಗಳು ವಿಜಯದಶಮಿ ಪ್ರಯುಕ್ತ ದುರ್ಗಾದೇವಿಯನ್ನು ಮೆರವಣಿಗೆ ಮೂಲಕ ನದಿ ತೀರಕ್ಕೆ ತರಲಾಗಿತ್ತು. ದುರ್ಗಾ ದೇವಿ ವಿಸರ್ಜನೆ ಸಂದರ್ಭದಲ್ಲಿ ಬಾಲಕನೊಬ್ಬ ಈಜಲು ನದಿಗೆ ದುಮಿಕಿದ್ದಾನೆ, ಬಳಿಕ ಸುಳಿಗೆ ಸಿಲುಕಿ ಮುಳುಗಿದ್ದಾನೆ. ಈ ಬಾಲಕನನ್ನು ರಕ್ಷಿಸಲು ಮತ್ತೆ ಇಬ್ಬರು ನದಿಗೆ ಹಾರಿದ್ದಾರೆ ಅವರು ಕೂಡ ಮುಳುಗಿದ್ದಾರೆ, ಇವರನ್ನು ರಕ್ಷಿಸಲು ಮತ್ತೆ ಕೆಲವರು ನದಿಗೆ ಹಾರಿದ್ದು 10 ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.