ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದಲ್ಲಿ ನದಿಗೆ ಉರುಳಿದ ಮದುವೆ ದಿಬ್ಬಣದ ಬಸ್‌: 24 ಮಂದಿ ಸಾವು 

Last Updated 26 ಫೆಬ್ರುವರಿ 2020, 6:33 IST
ಅಕ್ಷರ ಗಾತ್ರ

ಬೂಂದೀ: ರಾಜಸ್ಥಾನದ ಬೂಂದೀ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ 24 ಮಂದಿ ಸಾವಿಗೀಡಾಗಿದ್ದಾರೆ. ಮದುವೆ ದಿಬ್ಬಣ ಹೊರಟ್ಟಿದ್ದ ಬಸ್‌ ನದಿಗೆ ಉರುಳಿದ ಪರಿಣಾಮ ಭೀಕರ ದುರಂತವಾಗಿದೆ.

ಬಸ್‌ ಕೋಟಾದಿಂದ ಸವಾಯಿಮಾಧೋಪುರ್‌ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮದುವೆ ದಿಬ್ಬಣದ ಬಸ್‌ನಲ್ಲಿ ಸುಮಾರು 30ಜನ ಪ್ರಯಾಣಿಸುತ್ತಿದ್ದರು.

ಬೂಂದೀ ಮತ್ತು ಸವಾಯಿಮಾಧೋಪುರ್ ಜಿಲ್ಲೆಯ ನಡುವೆ ಪಾಪಡೀ ಗ್ರಾಮದ ಸಮೀಪ ಚಲಿಸುತ್ತಿದ್ದ ಬಸ್‌ ಮೇಜ್‌ ನದಿಗೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಬಸ್‌ ನದಿಗೆ ಬಿದ್ದ ನಂತರದಲ್ಲಿ ಸ್ಥಳೀಯ ಗ್ರಾಮಸ್ಥರು ನದಿಗೆ ಜಿಗಿದು ಹಲವರನ್ನು ರಕ್ಷಿಸಿದ್ದಾರೆ. ಗ್ರಾಮಸ್ಥರ ಪ್ರಕಾರ, ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ.

ರಕ್ಷಣಾ ತಂಡ ಸ್ಥಳಕ್ಕೆ ಬಂದಿದ್ದು, ಕಾರ್ಯಾಚರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT