ಉತ್ತರ ಪ್ರದೇಶದ ಅಲಿಗಢ ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಸತೀಶ್ ಗೌತಮ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡುತ್ತಲೇ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರು. ಪಕ್ಷದ ನಡೆಯಿಂದ ಅಸಮಾಧಾನ ಮೂಡಿತ್ತು. ಪ್ರತಿಭಟನೆ ಮತ್ತು ಅಸಮಾಧಾನಗಳನ್ನು ನಿಗ್ರಹಿಸುವ ಉದ್ದೇಶದಿಂದ ಮಾರ್ಚ್ 23ರಂದು ಅಲಿಗಢದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್, ’ ನರೇಂದ್ರ ಮೋದಿ ಅವರು ಮತ್ತೊಮ್ಮೆ ಗೆಲ್ಲಬೇಕು ಎಂದು ಪ್ರತಿಯೊಬ್ಬರೂ ಅಪೇಕ್ಷಿಸುತ್ತಿದ್ದಾರೆ. ಅವರು ಗೆಲ್ಲುವುದು ದೇಶಕ್ಕೆ ಅಗತ್ಯವೂ ಕೂಡ,’ ಎಂದು ಹೇಳಿದ್ದರು.