ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾ, ಥಾಯ್ಲೆಂಡ್ ಹಾಗೂ ಇತರ ದೇಶಗಳಿಗೆ ಕಳುಹಿಸಿದ್ದ ಪತ್ರಗಳಿಗೆ ಆ ರಾಷ್ಟ್ರಗಳು ನೀಡಿರುವ ಉತ್ತರವನ್ನು ಸಹ ವರದಿಯೊಂದಿಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಹಾಗೂ ಹೇಮಂತ್ ಗುಪ್ತಾ ಅವರಿರುವ ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರಿಗೆ ಸೂಚಿಸಿತು.