ಸರಣಿ ಟ್ವೀಟ್ ಮಾಡಿರುವ ಅವರು, ‘ಭಾರತೀಯ ಯೋಧರು ಗಡಿ ರಕ್ಷಣೆ ವೇಳೆ ಅಪಾರ ಪರಾಕ್ರಮದಿಂದ ಹೋರಾಡಿ ಕೆಚ್ಚೆದೆ ಪ್ರದರ್ಶಿಸಿ ಜೀವ ಕಳೆದುಕೊಂಡಿದ್ದಾರೆ. ಅವರ ಶೌರ್ಯವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಮೃತಪಟ್ಟ ಯೋಧರ ಕುಟುಂಬದ ನೋವಿನಲ್ಲಿ ನಾವೂ ಭಾಗಿದಾರರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯೋಧರ ಕುಟುಂಬಕ್ಕೆ ಇಡೀ ದೇಶ ಹೆಗಲು ಕೊಡಲಿದೆ’ ಎಂದು ಭಾವುಕರಾಗಿ ನುಡಿದಿದ್ದಾರೆ.