ಮಂಗಳವಾರ ಸುದ್ಧಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಇನ್ನೂ ಭೂತಕಾಲದಲ್ಲೇ ಇದೆ.ಅವರಿಗೆ ಭವಿಷ್ಯದ ಬಗ್ಗೆ ಗೊತ್ತಿಲ್ಲ. ಇವತ್ತು ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯೊಂದಿಗಿದ್ದಾರೆ.ದೇಶದ ಜನರು ಅವರೊಂದಿಗೆ ಇರುವಾಗ ನಾನೂ ಅವರೊಂದಿಗಿದ್ದೇನೆ.ನಾನು ನಾಳೆ ಬಿಜೆಪಿ ಸೇರಲಿದ್ದೇನೆ.ನಾನು ನನ್ನ ಪಕ್ಷ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.