ಆದಾಗ್ಯೂ, ಅಯೋಧ್ಯೆಯಲ್ಲಿ ದೇವಾಲಯವನ್ನು ನಾಶಮಾಡಿ ಬಾಬರಿ ಮಸೀದಿ ನಿರ್ಮಿಸಲಾಗಿದೆ. ಈ ಭೂಮಿ ಯಾರಿಗೂ ಸೇರಿದ್ದಲ್ಲ ಎಂದು ಹೇಳುವುದು ತಪ್ಪು. ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದರೆ ಅದು ಮಸೀದಿಯಾಗಿರಲ್ಲ. ಯಾಕೆಂದರೆ ಅದು ಷರಿಯತ್ ಕಾನೂನಿಗೆ ವಿರುದ್ಧವಾಗಿರುತ್ತದೆ ಎಂದಿದ್ದಾರೆ ವೈದ್ಯನಾಥನ್.
ವಿವಾದಿತ ಭೂಮಿಯಲ್ಲಿರುವ ಆ ಕಟ್ಟಡದ 14 ಕಂಬಗಳಲ್ಲಿ ಹಿಂದೂ ದೇವರ ಸಂಕೇತಗಳಿವೆ ಎಂದು 1950ರಲ್ಲಿ ಸಲ್ಲಿಸಿದ್ದ ಫೈಜಾಬಾದ್ ಕಮಿಷನರ್ ವರದಿಯನ್ನುಉಲ್ಲೇಖಿಸಿದ ವೈದ್ಯನಾಥನ್, ಕಂಬಗಳಲ್ಲಿ ಹಿಂದೂ ದೇವರ ಸಂಕೇತಗಳಿರುವಾದ ಅದು ಮಸೀದಿಯಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: