ಮಹಾರಾಷ್ಟ್ರದ ನಾಸಿಕ್ನಲ್ಲಿ ಗುರುವಾರ ಮಹಾಜನಾದೇಶ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕಳೆದ 2- 3 ತಿಂಗಳಲ್ಲಿ ಕೆಲವು ಚರ್ಚಾ ಶೂರರು ಮತ್ತು ಬಿಚ್ಚುಮಾತಿನ ವ್ಯಕ್ತಿಗಳು ರಾಮಮಂದಿರ ಬಗ್ಗೆ ಅಸಂಬದ್ಧ ಮಾತುಗಳನ್ನಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಬಗ್ಗೆ ಗೌರವ ಇಟ್ಟುಕೊಂಡಿರಬೇಕು. ರಾಮ ಮಂದಿರ ವಿಷಯ ನ್ಯಾಯಾಲಯದಲ್ಲಿದೆ. ಎಲ್ಲ ಪಂಗಡಗಳು ತಮ್ಮ ವಾದಗಳು ಮಂಡಿಸುತ್ತಿದ್ದು, ನ್ಯಾಯಾಲಯ ಅದನ್ನು ಆಲಿಸುತ್ತಿದೆ.