‘ರೋಹಿಣಿ ಮಳೆ ಮುಗಿದ ಬೆನ್ನಲ್ಲೇ ಬಿತ್ತನೆ ಮಾಡಬೇಕು. ಇಲ್ಲದಿದ್ದರೆ ಬಿತ್ತನೆ ಬೀಜದಲ್ಲಿ ಹುಳ ಬಂದು ಫಸಲು ಚೆನ್ನಾಗಿ ಬರುವುದಿಲ್ಲ. ಈ ಮಳೆ ಮುಗಿಯಲು ಇನ್ನು 8 ದಿನ ಬಾಕಿ ಇದೆ. ಅಷ್ಟರೊಳಗಾದರೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ಗುರ್ಜಿ ಪೂಜೆ ಮಾಡಕತ್ತಿವಿ’ ಎಂದು ರಾಜೂರು ಗ್ರಾಮದ ಶರಣಪ್ಪ ಜಿಗಳೂರ, ಅಲ್ಲಾಸಾಬ್ ಮುಜಾವರ್, ನಾಗಪ್ಪ ಶಂಕ್ರಿ, ಹನುಮಪ್ಪ ಗಂಗಣ್ಣೆವರ ಹೇಳಿದರು.