ಅಹಮದಾಬಾದ್: ಮುಂದಿನ ಲೋಕಸಭಾ ಚುನಾವಣೆಗೂ ಮುನ್ನವೇ, ಅಹಮದಾಬಾದ್ ಹೆಸರನ್ನು ಕರ್ಣಾವತಿ ಎಂದು ಬದಲಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ.
‘ಅಹಮದಾಬಾದ್ ಎನ್ನುವುದು ಗುಲಾಮಿತನದ ಸಂಕೇತವಾಗಿದೆ. ಆದರೆ, ಕರ್ಣಾವತಿ ಎನ್ನುವುದು ನಮ್ಮ ಹೆಮ್ಮೆ, ಆತ್ಮಗೌರವ, ಸಂಸ್ಕೃತಿಯ ಸಂಕೇತವಾಗಿದೆ’ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.