ಜೂನ್ 14ರಂದು ಶುಜಾತ್ ಅವರು ಕಾರಿನಲ್ಲಿ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ಮಳೆಗೆದಿದ್ದರು.ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರಾಣ ಉಳಿಸಲಾಗಲಿಲ್ಲ.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಶ್ರೀನಗರದ ಡಿಐಜಿ ನೇತೃತ್ವದ ವಿಶೇಷ ತನಿಖಾ ತಂಡ ಹಂತಕರನ್ನುಪತ್ತೆ ಹಚ್ಚಿತ್ತು. ಅದೇ ವೇಳೆಶುಜಾತ್ ಅವರ ವಿರುದ್ಧ ಬರೆದ ಅನಾಮಿಕ ಬ್ಲಾಗರ್ ಮತ್ತು ಇತರ ಪತ್ರಕರ್ತರನ್ನೂ ಗುರುತು ಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.