ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ‘ಚಾಯ್ವಾಲಾ ಪ್ರಧಾನಿಯ ಕೈಯಲ್ಲಿರುವ ಕೆಟಲ್ ಹಣಕಾಸು ಸಚಿವ’ ಎಂದು ಲೇವಡಿ ಮಾಡಿದ್ದಾರೆ.‘ಬಿಜೆಪಿಯನ್ನು ಗೆಲ್ಲಿಸಿದರೆ, ಬಂಗಾಳದ ಜನರಿಗೆ ಎರಡೂ ಕೈತುಂಬ ಲಡ್ಡು ನೀಡುವುದಾಗಿ ಕಳೆದ ಚುನಾವಣೆಯಲ್ಲಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರಿಗೆ ತಾವು ಕೊಟ್ಟ ಭರವಸೆಯನ್ನು ಈಡೇರಿಸಿಕೊಳ್ಳಲು ಆಗಲಿಲ್ಲ’ ಎಂದೂ ಹೇಳಿದ್ದಾರೆ.