ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡ್ಡು ನೀಡಲು ವಿಫಲವಾದ ಬಿಜೆಪಿಗೆ ಜನರು ರಸಗುಲ್ಲಾ ನೀಡಲಿದ್ದಾರೆ: ಮಮತಾ ವ್ಯಂಗ್ಯ

Last Updated 20 ಏಪ್ರಿಲ್ 2019, 2:40 IST
ಅಕ್ಷರ ಗಾತ್ರ

ಗಂಗಾರಾಂಪುರ (ಪಶ್ಚಿಮ ಬಂಗಾಳ): ಲಡ್ಡು ನೀಡಲು ವಿಫಲವಾಗಿರುವ ಕೇಸರಿ ಪಕ್ಷಕ್ಕೆ ಜನರು ರಸಗುಲ್ಲಾ (ಸೊನ್ನೆ) ನೀಡಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಬಾರಿ ಸೊನ್ನೆ ಸುತ್ತಲಿದೆ ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸೀಟು ಗೆದ್ದಿತ್ತು. ಈ ಬಾರಿ ಒಂದೂ ಸ್ಥಾನವನ್ನು ಗೆಲ್ಲುವುದಿಲ್ಲ’ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ‘ಚಾಯ್‌ವಾಲಾ ಪ್ರಧಾನಿಯ ಕೈಯಲ್ಲಿರುವ ಕೆಟಲ್ ಹಣಕಾಸು ಸಚಿವ’ ಎಂದು ಲೇವಡಿ ಮಾಡಿದ್ದಾರೆ.‘ಬಿಜೆಪಿಯನ್ನು ಗೆಲ್ಲಿಸಿದರೆ, ಬಂಗಾಳದ ಜನರಿಗೆ ಎರಡೂ ಕೈತುಂಬ ಲಡ್ಡು ನೀಡುವುದಾಗಿ ಕಳೆದ ಚುನಾವಣೆಯಲ್ಲಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರಿಗೆ ತಾವು ಕೊಟ್ಟ ಭರವಸೆಯನ್ನು ಈಡೇರಿಸಿಕೊಳ್ಳಲು ಆಗಲಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT