ಗುರುವಾರ ಬಜೆಟ್ ಮಂಡಿಸಿದಹಣಕಾಸು ಸಚಿವ ಟಿ.ಎಂ. ಥಾಮಸ್ ಇಸಾಕ್ ಅವರು ಅನುದಾನ ಘೋಷಿಸಿದ ವೇಳೆ, ‘ಶಬರಿಮಲೆ ದೇಗುಲದ ಆದಾಯವನ್ನು ಸರ್ಕಾರ ಕೊಳ್ಳೆ ಹೊಡೆಯುತ್ತಿದೆ ಎಂದು ಭಕ್ತರ ಸೋಗಿನಲ್ಲಿ ಕೆಲವು ರಾಜಕಾರಣಿಗಳು ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ.ಸುಳ್ಳು ಸುದ್ದಿ ಹರಡಿ,ಭಕ್ತರು ದೇಗುಲಕ್ಕೆ ಕಾಣಿಕೆ ಸಲ್ಲಿಸುವುದನ್ನು ತಡೆಯುವ ಮೂಲಕ ದೇವಸ್ವಂ ಆಡಳಿತ ಅಸ್ಥಿರಗೊಳಿಸುವುದು ಇವರ ಉದ್ದೇಶ. ಆದರೆ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ’ಎಂದು ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದಾರೆ.