ಒಂದೇ ದೇಶದಲ್ಲಿದ್ದುಕೊಂಡು ಪಕ್ಷ, ಸಿದ್ಧಾಂತಗಳು ಬೇರೆಯಾದ ಮಾತ್ರಕ್ಕೆ ಅನ್ಯರನ್ನು ನಿಕೃಷ್ಟವಾಗಿ ನಿಂದಿಸಿಕೊಂಡು ವಾಗ್ದಾಳಿ ನಡೆಸುವುದಕ್ಕೆ ಇವರಿಗೆ ಬಿಟ್ಟಿ ಹಕ್ಕು ನೀಡಿದವರು ಯಾರು? ಕೀಳು ಅಭಿರುಚಿಯ ಮಾತು, ಆರೋಪಗಳನ್ನು ಜನರಿಗೆ ಅಸಹ್ಯ ಎನಿಸುವ ರೀತಿಯಲ್ಲಿ ಮಂಡಿಸುವ ಧಾಟಿಯಿಂದ ಅನಂತಕುಮಾರ ಹೆಗಡೆ ಹೊರಬರಲು ಅವರ ‘ಧರ್ಮದೇವತೆ’ ಬುದ್ಧಿ ನೀಡಲಿ.
-ಚಂಪಕ, ಬೆಂಗಳೂರು