ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಮಾತನಾಡಿ, ‘ಶಾಂತಿಯುತವಾಗಿ ಮನವಿ ಪತ್ರ ಸಲ್ಲಿಸುವುದು ನಮ್ಮ ಹಕ್ಕು.ಸಂಸತ್ ಅನುಮೋದನೆ ಪಡೆದಿರುವ ವಿವಾದಿತ ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ಮಸೂದೆಗೆ ತಡೆ ಹಿಡಿಯುವಂತೆ ಕೋರಿ ಅರ್ಜಿ ಸಲ್ಲಿಸಲು ಬಂದರೆಪೊಲೀಸರು ಈ ಹಕ್ಕನ್ನೂ ಕಸಿದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವವೇ’ ಎಂದು ಪ್ರಶ್ನಿಸಿದ್ದಾರೆ.