ಪಟ್ಟನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ ನಡೆದ ಕಲ್ಲುತೂರಾಟದಲ್ಲಿ 55 ವರ್ಷದ ಚಂದ್ರನ್ ಉಣ್ಣಿತ್ತಾನ್ ಎಂಬವರು ಗಾಯಗೊಂಡು ಬಳಿಕ ತಡರಾತ್ರಿ ಮೃತಪಟ್ಟರು. ಆದರೆ, ಉಣ್ಣಿತ್ತಾನ್ ಅವರು ಹೃದಯಾಘಾತದಿಂದ ಸತ್ತರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.