ನವದೆಹಲಿ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಿದ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂಬ ಅರ್ಜಿಗಳ ವಿಚಾರಣೆ ಇದೇ 22ರಿಂದ ನಡೆಯುವ ಸಾಧ್ಯತೆ ಇಲ್ಲ.
ತೀರ್ಪು ಕೊಟ್ಟ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ವೈದ್ಯಕೀಯ ಕಾರಣಗಳಿಂದಾಗಿ ರಜೆಯಲ್ಲಿದ್ದಾರೆ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ತಿಳಿಸಿದ್ದಾರೆ. ಹಾಗಾಗಿ,ನಿಗದಿಯಂತೆ 22ರಂದು ವಿಚಾರಣೆ ನಡೆಯದು.