ಶಬರಿಮಲೆಗೆ ಮಹಿಳಾ ಪ್ರವೇಶಕ್ಕೆ ಬೆದರಿಕೆಯೊಡ್ಡಿ ಹಿಂದೂ ಸಂಘಟನೆಗಳು ಬೆದರಿಕೆಯೊಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಇದು ಹಿಂದೂ ನವೋದಯ ಮತ್ತು ಗೊಡ್ಡು ಸಂಪ್ರದಾಯದ ನಡುವಣ ಹೋರಾಟ. ಎಲ್ಲ ಹಿಂದೂಗಳೂ ಸಮಾನರು, ಜಾತಿ ವ್ಯವಸ್ಥೆ ತೊಲಗಬೇಕು ಎಂದು ನವೋದಯ ಹೇಳುತ್ತದೆ. ಯಾಕೆಂದರೆ ಇಂದು ಬ್ರಾಹ್ಮಣರು ಮಾತ್ರ ಬುದ್ಧಿವಂತರಲ್ಲ, ಅವರು ಸಿನಿಮಾ, ವ್ಯಾಪರ ಕ್ಷೇತ್ರದಲ್ಲೂ ಇದ್ದಾರೆ. ಹುಟ್ಟಿನ ವೇಳೆ ಜಾತಿ ಎಲ್ಲಿ ಬರೆದಿರುತ್ತದೆ? ಶಾಸ್ತ್ರಗಳನ್ನು ತಿದ್ದುಪಡಿ ಮಾಡಬಹುದು’ ಎಂದು ಸ್ವಾಮಿ ಹೇಳಿರುವುದನ್ನು ಎಎನ್ಐ ಟ್ವೀಟ್ ಮಾಡಿದೆ.