ಕರ್ನಾಟಕದಲ್ಲಿ ಜೋಗಿಮಟ್ಟಿ (ಚಿತ್ರದುರ್ಗ), ತಿಮ್ಲಾಪುರ (ತುಮಕೂರು) ಹಾಗೂ ಯಡಹಳ್ಳಿ ಜಿಂಕೆ (ಬಾಗಲಕೋಟೆ ಜಿಲ್ಲೆ) ಧಾಮಗಳು ಈ ಪಟ್ಟಿಯಲ್ಲಿ ಸೇರಿವೆ. ಆದರೆ, ಇವುಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಪ್ರಸ್ತಾವವನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಕಳುಹಿಸಿಲ್ಲ. ಗಣಿಗಾರಿಕೆ, ಸಾ ಮಿಲ್ ಸ್ಥಾಪನೆ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ಆರಂಭಿಸಲು, ಅರಣ್ಯದಲ್ಲಿ ಸಿಗುವ ಕಟ್ಟಿಗೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು, ಬೃಹತ್ ಜಲ ವಿದ್ಯುತ್ ಉತ್ಪಾದನಾ ಘಟಕಗಳನ್ನು ಪರಿಸರ ಸೂಕ್ಷ್ಮವಲಯದಲ್ಲಿ ಸ್ಥಾಪಿಸುವಂತಿಲ್ಲ.