‘ನಿರಂಕುಶಾಧಿಕಾರಿಯಾಗುವುದರ ವಿರುದ್ಧ ಎಚ್ಚರಿಕೆ ನೀಡಿ ಪಂಡಿತ್ ನೆಹರು ಅವರು ಒಮ್ಮೆ ಪತ್ರಿಕೆಯೊಂದರಲ್ಲಿ ಸ್ವಯಂ ವಿಮರ್ಶಾತ್ಮಕ ಬರಹ ಬರೆದಿದ್ದರು’ ಎಂದು ಝಾ ನೆನಪಿಸಿದ್ದಾರೆ. ‘ಅದು ನಿಜವಾದ ಕಾಂಗ್ರೆಸ್. ಅಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಹಿಷ್ಣುತೆ ಹಾಗೂ ಒಳಗೊಳ್ಳುವಿಕೆ ಇದ್ದವು. ನಾವು ಈ ಮೌಲ್ಯಗಳಿಂದ ದೂರ ಸರಿಯುತ್ತಿದ್ದೇವೆ. ಏಕೆ’ ಎಂದು ಅವರು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.