ವಕೀಲ ಎಸ್.ಕೆ. ಸಾಮಿ ಅವರು 2014ರಲ್ಲಿ ಚೆನ್ನೈನ ಅಣ್ಣಾ ಸಲೈನಲ್ಲಿರುವ ಶರವಣ ಭವನ ಸಮೂಹದ ಹೋಟೆಲ್ನಲ್ಲಿ ಆಹಾರ ಸೇವಿಸಿದ್ದರು. ವಿಷಾಹಾರ ಸೇವನೆಯ ಪರಿಣಾಮ ಅವರಿಗೆ ಅನಾರೋಗ್ಯ ಕಾಡಿತ್ತು. ವಿಷಾಹಾರ ಸೇವನೆಯಿಂದ ಅನುಭವಿಸಿದ ಮಾನಸಿಕ ಸಂಕಟ ಮತ್ತು ಇತರ ಸಮಸ್ಯೆಗಳಿಗೆ ಗುರಿಯಾಗಿರುವುದಕ್ಕೆ ₹1 ಲಕ್ಷ ಹಾಗೂ ವ್ಯಾಜ್ಯದ ವೆಚ್ಚಕ್ಕೆ ₹10 ಸಾವಿರ ಪರಿಹಾರ ನೀಡುವಂತೆ ವೇದಿಕೆ ಸೂಚಿಸಿದೆ.