ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹವಾದರೂ, ವಿವಾದಿತ ಸ್ಥಳದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನೋ, ಸರ್ವಧರ್ಮಗಳಿಗೂ ಅನ್ವಯವಾಗುವಂತಹಅರ್ಥಪೂರ್ಣ ಸ್ಮಾರಕ ನಿರ್ಮಿಸುವುದಕ್ಕೆ ಅವಕಾಶ ನೀಡಬಹುದಿತ್ತು. ಅಯೋಧ್ಯೆಯಲ್ಲೇ ಸುನ್ನಿ ವಕ್ಫ್ ಬೋರ್ಡ್ಗೆ 5 ಎಕರೆ ಜಮೀನು ಕೊಟ್ಟಂತೆ ಹಿಂದೂಗಳಿಗೆ ಸಹ 5 ಎಕರೆ ನಿವೇಶನ ಕೊಡಿಸಿ ಎರಡೂ ಧರ್ಮದವರ ಪ್ರಾರ್ಥನಾ ಮಂದಿರಕ್ಕೆ ಅವಕಾಶ ಮಾಡಿಕೊಡಬಹುದಿತ್ತು.