ಕಾಶ್ಮೀರದಲ್ಲಿ ಮೊಬೈಲ್ ಫೋನ್ ಸಂಪರ್ಕ ಸ್ಥಗಿತಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಜ್ಯಪಾಲರು ಉಗ್ರ ಕೃತ್ಯಗಳನ್ನು ನಡೆಸುವುದಕ್ಕಾಗಿ ಉಗ್ರರು ಟೆಲಿಫೋನ್ ಬಳಸುತ್ತಾರೆ. ಟೆಲಿಫೋನ್ ಸಂಪರ್ಕ ಇಲ್ಲ ಎಂದು ಜನರು ಬೊಬ್ಬೆ ಹಾಕುತ್ತಿದ್ದಾರೆ. ಉಗ್ರ ಚಟುವಟಿಕೆಗಳಿಗೆ, ಉಪದೇಶ ನೀಡಲು ಮತ್ತು ಒಟ್ಟು ಸೇರುವುದಕ್ಕಾಗಿ ಉಗ್ರರು ಟೆಲಿಫೋನ್ ಸೇವೆ ಬಳಸುತ್ತಿದ್ದಾರೆ. ನಮಗೆ ಕಾಶ್ಮೀರದಲ್ಲಿನ ಜನರ ಪ್ರಾಣ ಮುಖ್ಯ, ಟೆಲಿಫೋನ್ ಅಲ್ಲ. ಫೋನ್ ಇಲ್ಲದೆ ಜನರು ಈ ಹಿಂದೆ ಬದುಕುತ್ತಿದ್ದರು ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.