‘ನನಗೆ ಫೇಸ್ಬುಕ್ನಲ್ಲಿ ಬೆದರಿಕೆ ಸಂದೇಶಗಳು ಬರುತ್ತಿವೆ. ನಿನ್ನೆ ನನ್ನ ಸಹೋದ್ಯೋಗಿಯನ್ನು ರಸ್ತೆಯಲ್ಲಿ ಕೆಲವರು ತಡೆದು, ಬೆದರಿಕೆ ಹಾಕಿದ್ದಾರೆ. ಕೆಲವೇ ದಿನಗಳ ಹಿಂದೆ ಅರ್ಜಿದಾರರೊಬ್ಬರ ಮೇಲೆ ಹಲ್ಲೆ ನಡೆದಿದೆ. ‘ಸುಪ್ರೀಂ ಕೋರ್ಟ್ ನಮ್ಮದೇ, ಹೀಗಾಗಿ ಅಯೋಧ್ಯೆ ತೀರ್ಪೂ ನಮ್ಮ ಪರವಾಗೇ ಬರುತ್ತದೆ’ ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಘೋಷಿಸುತ್ತಿದ್ದಾರೆ. ನ್ಯಾಯಾಲಯದ ಒಳಗೆ ಸೌಹಾರ್ದ ವಾತಾವರಣ ಇದೆ. ಆದರೆ ನ್ಯಾಯಾಲಯದ ಹೊರಗೆ ಪರಿಸ್ಥಿತಿ ಸರಿಯಾಗಿಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.