ನವದೆಹಲಿ: ಹೂಡಿಕೆದಾರರಿಗೆ ₹25,700 ಕೋಟಿ ಹಿಂದಿರುಗಿಸಲು ವಿಫಲವಾಗಿರುವ ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತ ರಾಯ್ ಫೆಬ್ರುವರಿ 28ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಗುರುವಾರ ತಾಕೀತು ಮಾಡಿದೆ.
‘ಹಣ ಹಿಂದಿರುಗಿಸಲು ಆರು ತಿಂಗಳ ಕಾಲವಕಾಶ ನೀಡಲಾಗಿತ್ತು. ಆದರೆ, ₹15,000 ಕೋಟಿಯನ್ನಷ್ಟೇ ಠೇವಣಿ ಮಾಡಲಾಗಿದೆ. ಈವರೆಗೆ ವರ್ಗಾವಣೆಯಾಗಿರುವ ಹಣ ನ್ಯಾಯಾಲಯಕ್ಕೆ ಸಹರಾ ಗ್ರೂಪ್ ಬಗ್ಗೆ ವಿಶ್ವಸಾರ್ಹತೆ ಉಂಟುಮಾಡಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ.
ಹೆಚ್ಚಿನ ಕಾಲವಕಾಶ ಅಥವಾ ಇತರೆ ನಿರ್ದೇಶನಗಳನ್ನು ನೀಡಲು ಪೀಠ ನಿರಾಕರಿಸಿತು.