ಎಸ್ಸಿ/ಎಸ್ಟಿ ದೌರ್ಜನ್ಯ (ತಡೆ) ಕಾಯ್ದೆಗೆ ಸಂಬಂಧಿಸಿ 2018ರಲ್ಲಿ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಟೀಕಿಸಿದ ಕೋರ್ಟ್, ‘ಕಾನೂನಿನ ದುರುಪಯೋಗವಾಗಿದೆ ಎಂಬ ಕಾರಣಕ್ಕೆ ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾದ ಆದೇಶವನ್ನು ನೀಡಲು ಸಾಧ್ಯವೇ? ಐಪಿಸಿ ಕಾಯ್ದೆಯಡಿ ಸಾಮಾನ್ಯ ವರ್ಗದ ವ್ಯಕ್ತಿಯೂ ಸುಳ್ಳು ದೂರುಗಳನ್ನು ನೀಡಬಹುದಲ್ಲ’ ಎಂದು ಪ್ರಶ್ನಿಸಿತು.