ಹಳಗ, ಮತ್ತಿಗಾರ್, ಸಿಂಗನಬಿದರೆ, ಕೋಣೆಗದ್ದೆ, ಮಂಡಗದ್ದೆ ಶಾಲೆಗಳು ಅವರ ನೆರವು ಪಡೆದು ಸುಸಜ್ಜಿತ ಶಾಲೆಗಳಾಗಿವೆ. ಪುಟ್ಟ ರಂಗಮಂದಿರ, ಶೌಚಾಲಯ, ಕಂಪ್ಯೂಟರ್, ಕುರ್ಚಿ, ಬೆಂಚುಗಳು, ಆವರಣದಲ್ಲಿ ಔಷಧೀಯ ಸಸ್ಯಗಳು, ಹಣ್ಣು ಬಿಡುವ ಮರಗಿಡಗಳು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಶಾಲೆಗಳಲ್ಲಿ ವನಗಳನ್ನು ನಿರ್ವಹಿಸಲು ಕಾರ್ಮಿಕರನ್ನು ನೇಮಿಸಿ, ಸಂಬಳವನ್ನೂ ಇವರೇ ನೀಡುತ್ತಾರೆ. ಶಿವಮೊಗ್ಗ ಸಮೀಪ ಅಧ್ಯಾತ್ಮ ಕೇಂದ್ರಕ್ಕೆ 27 ಎಕರೆ ಜಮೀನನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ.