ಟ್ರಂಪ್ ಬೆಂಗಾವಲು ವಾಹನ ಹಾದುಹೋಗುವ ದಾರಿಯಲ್ಲಿರುವ ಕೊಳೆಗೇರಿಗಳನ್ನು ಮರೆ ಮಾಡಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಬೃಹತ್ ಗೋಡೆಯೊಂದನ್ನುನಿರ್ಮಿಸಿದೆ. ಈ ಬಗ್ಗೆ ಟೀಕಿಸಿದ ಶಿವಸೇನಾ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಹಳ ವರ್ಷಗಳ ಹಿಂದೆ ಗರೀಭೀ ಹಟಾವೋ ಎಂಬ ಘೋಷಣೆಯೊಂದಿಗೆ ಯೋಜನೆ ರೂಪಿಸಿದ್ದರು. ಆದರೆ ಈಗ ಮೋದಿ ಗರೀಭೀ ಚುಪಾವೋ (ಬಡತವನ್ನು ಅಡಗಿಸಿ) ಯೋಜನೆ ರೂಪಿಸುವಂತಿದೆ.ಅಹಮದಾಬಾದ್ನಲ್ಲಿ ಈ ರೀತಿ ಗೋಡೆ ನಿರ್ಮಿಸುವುದಕ್ಕೆ ವಿಶೇಷ ಅನುದಾನವನ್ನು ನೀಡಲಾಗಿದೆಯೇ? ದೇಶದಾದ್ಯಂತ ಈ ರೀತಿಯ ಗೋಡೆ ನಿರ್ಮಿಸಲು ಅಮೆರಿಕ ಭಾರತಕ್ಕೆ ಸಾಲ ನೀಡಲಿದೆಯೇ?