ನಿಗದಿಯಂತೆ ಇದೇ 26ಕ್ಕೆ ಅಧಿವೇಶನ ಕೊನೆಗೊಳ್ಳಬೇಕು. ಆದರೆ, ಇನ್ನೂ ಐದು ದಿನ ಕಲಾಪ ಮುಂದುವರಿಸಲು ಸರ್ಕಾರ ಬಯಸಿದೆ. ಈಗಾಗಲೇ ಹೊರಡಿಸಲಾಗಿರುವ 10 ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳುವುದು ಸರ್ಕಾರದ ಉದ್ದೇಶ. ಇದರಲ್ಲಿ ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವಾಗಿ ಪರಿಗಣಿಸುವ ಸುಗ್ರೀವಾಜ್ಞೆಯೂ ಇದೆ.