‘ನಿಂದನೆ, ಕಿರುಕುಳಕ್ಕೆ ಒಳಗಾದ ಉಪನ್ಯಾಸಕಿ ಇ–ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ತನಿಖೆ ನಡೆಯುತ್ತಿದೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಈವರೆಗೆ ಇಂಥ ಘಟನೆ ನಡೆದಿಲ್ಲ. ಅದರಲ್ಲೂ ರವಿಂದ್ರನಾಥ ಟ್ಯಾಗೋರ್ ಅವರ ಹೆಸರಿನ ಸಂಸ್ಥೆಯಲ್ಲಿ ಇಂಥ ಘಟನೆ ನಡೆದಿದೆ ಎಂಬುದು ಬೇಸರದ ವಿಚಾರ. ತನಿಖೆಯ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಸವ್ಯಸಾಚಿ ಬಸು ರೇ ಚೌಧರಿ ಹೇಳಿದ್ದಾರೆ.