ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಿದ್ದು,ದೇವಸ್ಥಾನ ಪ್ರದೇಶದಲ್ಲಿಸೂಕ್ತ ಮೂಲ ಸೌಲಭ್ಯದ ಕೊರತೆಯಿದೆ ಎಂದು ಭಕ್ತರು ಆರೋಪಿಸಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಶಬರಿಮಲೆಯಲ್ಲಿ ಪ್ರತಿಭಟನೆಗಳು ನಡೆದು, ಭಕ್ತರಿಗೆ ಅನನುಕೂಲವಾಗಿತ್ತು. ‘ಈ ಬಾರಿ ಶಾಂತಿಯುತವಾದ ವಾತಾವರಣವಿದ್ದು, ಯಾವುದೇ ನಿರ್ಬಂಧಗಳನ್ನೂ ಹೇರುತ್ತಿಲ್ಲ’ ಎಂದು ಭಕ್ತರೊಬ್ಬರು ಹೇಳಿದರು.