ಬಂಗಾಳದಲ್ಲಾಗಲೀ, ಇತರ ಯಾವುದೇ ಪ್ರದೇಶದಲ್ಲಾಗಲೀ ಎನ್ಆರ್ಸಿಗೆ ಅವಕಾಶ ಇರದು. ಈ ಒಪ್ಪಂದಕ್ಕೆ ಅಸ್ಸಾಂ ಸಮ್ಮತಿಸಿರುವುದರಿಂದ ಅಲ್ಲಿ ಎನ್ಆರ್ಸಿಗೆ ಅವಕಾಶ ನೀಡಲಾಗಿದೆ. ಹಿಂದೂ ಮುಸ್ಲಿಮರನ್ನು ವಿಭಜಿಸಲು ಕೆಲವರು ಎನ್ಆರ್ಸಿ ಕುರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಸ್ಸಾಂನಲ್ಲಿ 13 ಲಕ್ಷ ಹಿಂದೂಗಳನ್ನು ಎನ್ಆರ್ಸಿಯಿಂದ ಕೈಬಿಡಲಾಗಿದೆ. ಮುಸ್ಲಿಮರು, ಅಸ್ಸಾಮಿಯರು,ಹಿಂದಿ ಮಾತನಾಡುವವರನ್ನು ಕೈಬಿಡಲಾಗಿದೆ ಎಂದು ಬ್ಯಾನರ್ಜಿ ಹೇಳಿದರು.