ಆ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ‘ಕಾಂಗ್ರೆಸ್, ಶಿವಸೇನಾ ಮತ್ತು ಎನ್ಸಿಪಿ ನಾಯಕರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆ ಸಂಬಂಧ ತಮ್ಮ ಹಕ್ಕು ಮಂಡನೆ ಪತ್ರಸಲ್ಲಿಸಿದ್ದಾರೆ. ಕಾರಣ, ಈಗ ರಚನೆಯಾಗಿರುವ ಸರ್ಕಾರ ಭವಿಷ್ಯದಲ್ಲಿ ಪತನಗೊಳ್ಳಲಿದೆ. ಇನ್ನೊಂದು ಸಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರಬಾರದು ಎಂಬುದು ನಮ್ಮ ಆಶಯ,’ ಎಂದಿದ್ದಾರೆ.