ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಸಿಧು ನಡುವಿನಭಿನ್ನಮತ ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸುತ್ತಿದೆ ಎನ್ನುವ ಸಂದರ್ಭದಲ್ಲೇ ಅಮರಿಂದರ್ ಸಿಂಗ್ ರಾಜೀನಾಮೆ ಅಂಗೀಕರಿಸಿದ್ದಾರೆ.ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ವ್ಯವಹಾರಗಳ ಖಾತೆ ಹೊಂದಿದ್ದ ಸಿಧು ಅವರಿಗೆ,ಭಿನ್ನಮತ ತೀವ್ರಗೊಂಡ ಬಳಿಕ ಖಾತೆ ಬದಲಾಯಿಸಲಾಗಿತ್ತು. ಜೂನ್ 6ರಂದು ಅವರಿಗೆಇಂಧನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿತ್ತು. ಸಿಧು ಜತೆಗೆ ಇತರೆ ಸಚಿವರ ಖಾತೆಗಳನ್ನೂ ಬದಲಾಯಿಸಲಾಗಿತ್ತು.