ಸೋಮವಾರ ರಾತ್ರಿ ಪಾಕಿಸ್ತಾನ ಸೇನೆ ಅಖನೂರ್ ಮತ್ತು ಸುಂದರ್ಬನಿ ವಲಯದಲ್ಲಿ ಬಾಂಬ್ ದಾಳಿ, ಗುಂಡಿನ ದಾಳಿ ನಡೆಸಿತ್ತು ಎಂದು ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ. ದಾಳಿಯಲ್ಲಿ ಸೇನೆಯ ಯೋಧ ಸಾವಿಗೀಡಾದರು ಹಾಗೂ ನಾಲ್ಕು ಮಂದಿ ಇತರರು ಗಾಯಗೊಂಡಿದ್ದರು. ಆ ದಾಳಿಯಲ್ಲಿ ರೈಫಲ್ಮ್ಯಾನ್ ಕರಂಜೀತ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದರು, ರಕ್ತಸ್ರಾವ ಮತ್ತು ಗಾಯದ ತೀವ್ರತೆಯಿಂದ ಮೃತಟ್ಟಿದ್ದಾಗಿ ವಕ್ತಾರರು ತಿಳಿಸಿದ್ದಾರೆ.