ವಲಸೆ ಕಾರ್ಮಿಕರ ಚಲನವಲನದ ಮೇಲೆ ಕಣ್ಗಾವಲಿಡುವಂತೆ ರೈಲ್ವೆ ಸುರಕ್ಷತಾ ಪಡೆಯೂ ಸೇರಿದಂತೆ ಈ ವಲಯದ ಎಲ್ಲ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಜಾಗರೂಕತೆಯೊಂದಿಗೆ ರೈಲು ಚಲಾಯಿಸುವಂತೆಯೂ ಹೆಚ್ಚು ಬಾರಿ ಹಾರ್ನ್ ಮಾಡುವಂತೆಯೂ ಲೊಕೊಪೈಲಟ್ಗಳಿಗೆ ಸೂಚಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಇತ್ತೀಚೆಗೆ ಹಳಿ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ರೈಲು ಚಲಿಸಿ 16 ಮಂದಿ ಮೃತಪಟ್ಟಿದ್ದರು.