ಕೊರೊನಾ ವೈರಾಣು ಪಸರಿಸುವಿಕೆಯ ಪ್ರಮಾಣವನ್ನು ಅನುರಿಸರಿಸಿ ವಲಯಗಳಾಗಿ (ಕೆಂಪು, ಕಿತ್ತಳೆ, ಹಸಿರು) ವಿಂಗಡಿಸುವ ಅವಕಾಶವನ್ನು ರಾಜ್ಯಗಳಿಗೇ ನೀಡಬೇಕು ಎಂದು ಕೋರಿದವರು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್. ತಮ್ಮ ರಾಜ್ಯಕ್ಕೆ ₹30 ಸಾವಿರ ಕೋಟಿ ನೆರವು ನೀಡಬೇಕು ಎಂದೂ ಕೇಂದ್ರವನ್ನು ಅವರು ಕೇಳಿಕೊಂಡರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಕೇಂದ್ರವು ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.