ನಾಗಪುರ ಮಹಾನಗರ ಪಾಲಿಕೆ ಏರ್ಪಡಿಸಿದ್ದ ‘ಮೇಯರ್ ನಾವೀನ್ಯತೆ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,‘ವಿಮಾನನಿಲ್ದಾಣಗಳಲ್ಲಿ ಮೂತ್ರ ಶೇಖರಿಸಲು ತಿಳಿಸಿದ್ದೆನು. ಮನುಷ್ಯರ ಮೂತ್ರದಲ್ಲಿ ಅಮೋನಿಯಂ ಸಲ್ಫೇಟ್ ಹಾಗೂ ಸಾರಜನಕ ಲಭ್ಯವಾಗುತ್ತದೆ. ಯೂರಿಯಾವನ್ನು ನಾವು ಈಗ ಆಮದು ಮಾಡುತ್ತಿದ್ದೇವೆ. ದೇಶದ ಎಲ್ಲ ಕಡೆಗಳಲ್ಲಿ ಮೂತ್ರ ಸಂಗ್ರಹಿಸಿದರೆ, ಆಮದು ಕೊನೆಗೊಳಿಸಬಹುದು. ಅಷ್ಟರ ಮಟ್ಟಿಗೆ ನಮ್ಮಲ್ಲಿ ಸಂಗ್ರಹವಿದ್ದು, ಯಾವುದೂ ವ್ಯರ್ಥವಾಗಬಾರದು’ ಎಂದು ತಿಳಿಸಿದರು.