ನವದೆಹಲಿ: ಕೇಂದ್ರ ಸರ್ಕಾರವುಯೂರಿಯಾಯೇತರ ರಸಗೊಬ್ಬರ ಸಬ್ಸಿಡಿ ಕಡಿತಗೊಳಿಸಿದೆ. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ (2020–21)ಸರ್ಕಾರದ ಬೊಕ್ಕಸಕ್ಕೆ ₹ 22,186 ಕೋಟಿ ಉಳಿತಾಯವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫಾಸ್ಪೆಟಿಕ್ ಮತ್ತು ಪೊಟ್ಯಾಸಿಕ್ಗಳ (ಪಿಆ್ಯಂಡ್ಕೆ) ಪೋಷಕಾಂಶ ಆಧಾರಿತ ಸಬ್ಸಿಡಿ ದರ ನಿಗದಿಪಡಿಸಲೂ ಸಮಿತಿ ಅನುಮೋದನೆ ನೀಡಿದೆ.