‘ಲಾಕ್ಡೌನ್ನಿಂದಾಗಿ ಉದ್ಯಮಗಳು ಸ್ಥಗಿತವಾಗಿದೆ, ಜೀವನೋಪಾಯಕ್ಕೆ ದಾರಿಯಿಲ್ಲದಾಗಿದೆ. ಭವಿಷ್ಯಕ್ಕಾಗಿ ಕೂಡಿಟ್ಟ ಹಣವೂ ಆಹಾರ, ದಿನನಿತ್ಯದ ಖರ್ಚಿಗೆ ಬಳಸಲಾಗುತ್ತಿದೆ. ಹಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನ ಕಾಯುತ್ತಿದ್ದಾರೆ. ಹೀಗಾಗಿ ಇವುಗಳ ಚಿಕಿತ್ಸಾ ವೆಚ್ಚವನ್ನು ರದ್ದುಗೊಳಿಸಲು ಅಥವಾ ವಿನಾಯಿತಿ ನೀಡಲು ಎಲ್ಲ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳು, ಕ್ಲಿನಿಕ್ಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಆದೇಶಿಸುವಂತೆ ನಿರ್ದೇಶನ ನೀಡಬೇಕು’ ಎಂದು ವಕೀಲರಾದ ಸೌರ್ಜ್ಯ ದಾಸ್ ಅರ್ಜಿ ಸಲ್ಲಿಸಿದ್ದರು.